ದೆಹಲಿಯಲ್

ದೆಹಲಿಯಲ್ಲಿ ಸಂಸದರ ಸಭೆ ನಡೆಸಿದ ಬೊಮ್ಮಾಯಿ : ರಾಜ್ಯದ ಪರ‌ ಧ್ವನಿ ಎತ್ತಲು ಮನವಿ


CM Basavaraj Bommai Meets parliament members of Karnataka and Union minister Amit Shah
ದೆಹಲಿಯಲ್ಲಿ ಸಂಸದರ ಸಭೆ ನಡೆಸಿದ ಬೊಮ್ಮಾಯಿ : ರಾಜ್ಯದ ಪರ‌ ಧ್ವನಿ ಎತ್ತಲು ಮನವಿ
ಪ್ರಜಾವಾಣಿ ವಾರ್ತೆ Updated:
31 ಜುಲೈ 2021, 01:21 IST
ಅಕ್ಷರ ಗಾತ್ರ :ಆ |ಆ |ಆ
ನವದೆಹಲಿ: ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಸಂಸದರಲ್ಲಿ ಮನವಿ ಮಾಡಿದ್ದಾರೆ.
ಸಂಸತ್‌ನ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ, ಇಲ್ಲಿನ ಅಶೋಕ ಹೋಟೆಲ್‌ನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ರಾಜ್ಯದ ಸಂಸದರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
‘ನಾನು ಪ್ರತಿ ಬಾರಿ ದೆಹಲಿಗೆ ಬಂದಾಗಲೂ ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವೆ. ನೀವೂ ರಾಜ್ಯದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ನನ್ನ ಕೈ ಬಲಪಡಿಸಬೇಕು’ ಎಂದು ಅವರು ಕೋರಿದರು.
ಕೇಂದ್ರ ಸರ್ಕಾರದಲ್ಲಿ ಬಾಕಿ ಇರುವ ರಾಜ್ಯದ ವಿವಿಧ ಯೋಜನೆಗಳಿಗೆ ಅನುಮತಿ ಪಡೆಯುವ ನಿಟ್ಟಿನಲ್ಲಿ ಸಂಸತ್‌ನ ಉಭಯ ಸದನಗಳಲ್ಲಿ ಧ್ವನಿ ಎತ್ತುವಂತೆಯೂ ಅವರು ಈ ಸಂದರ್ಭ ಸಂಸದರನ್ನು ಆಗ್ರಹಿಸಿದರು.
Met the Chief Minister of Karnataka Shri @BSBommai Ji. My best wishes to him and his team in taking the state to newer heights. pic.twitter.com/dcKJzkU6Km
ಕೇಂದ್ರದ ಯೋಜನೆಗಳ ಅನುಷ್ಠಾನ ಹಾಗೂ ಪತ್ರ ವ್ಯವಹಾರದ ನಿಟ್ಟಿನಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿ ರಚಿಸಿ, ಬೆಂಗಳೂರಿನಲ್ಲಿ ಕಚೇರಿ ಆರಂಭಿಸಲಾಗುತ್ತದೆ. ಈ ಕಚೇರಿ ಮೂಲಕವೇ ಕೇಂದ್ರ ಸರ್ಕಾರದ ಕಚೇರಿಗಳನ್ನು ಸಂಪರ್ಕಿಸಲು ಸೂಚಿಸಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆಡಳಿತ ಪಕ್ಷದ ಸಂಸದರಾದ ಪ್ರತಾಪ ಸಿಂಹ, ಶ್ರೀನಿವಾಸ ಪ್ರಸಾದ್ ಗೈರು ಹಾಜರಾಗಿದ್ದರು.
ವಿಪಕ್ಷಗಳ ಸಂಸದರಾದ ಎಚ್.ಡಿ. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಸುರೇಶ್, ಪ್ರಜ್ವಲ್ ರೇವಣ್ಣ, ಜಿ.ಸಿ. ಚಂದ್ರಶೇಖರ್, ನಾಸಿರ್ ಹುಸೇನ್ ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ.
ಕೇಂದ್ರದ ಸಚಿವರಾದ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಭಗವಂತ ಖೂಬಾ ಹಾಗೂ ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್ ಹಾಜರಿದ್ದರು.
Met with Union Minister of Jal Shakti @gssjodhpur in New Delhi today and discussed about various water projects in the state. @MoJSDoWRRDGR@CMofKarnatakapic.twitter.com/TGFvdjlVus

Related Keywords

New Delhi , Delhi , India , Nirmala Sitharaman , Sumalatha Ambarish Krishna , Amit Shaw , Parliament House Center Home , Finance Secretary , State Nirmala Sitharaman , Discuss Conclusion , Ambarish Krishna , Center Minister , புதியது டெல்ஹி , டெல்ஹி , இந்தியா , அமித் ஷா , நிதி செயலாளர் ,

© 2025 Vimarsana